ಎಸ್.ಜಿ.ಎಲ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ. ಲಕ್ಷ್ಮಣ ನಾಯಕ್ ಕಥೆ ಬರೆದು ನಿರ್ಮಿಸುತ್ತಿರುವ ಆಶಾಕಿರಣಗಳು ಚಿತ್ರಕ್ಕೆ ಕಳೇದ ವಾರ ರೆಣು ಡಿಜಿ ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ಮುಗಿದಿದ್ದು, ಇದೀಗ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಜಿ.ವಿ. ರಾಮ್ರಾವ್ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜಿ. ನಾರಾಯಣ್ ಛಾಯಾಗ್ರಹಣ, ಸಾಯಿಗುರುನಾಥ್ ಸಂಗೀತ, ಕಪಿಲ್ ನೃತ್ಯ ನಿರ್ದೇಶನ, ಹರೀಶ್ ಕೊಡ್ಪಾಡಿ ಸಂಕಲನ, ಬಿ.ಆರ್. ನರಸಿಂಹ ಮೂರ್ತಿ ಸಂಭಾಷಣೆ ಹಾಗೂ ಸಹಕಾರ ನಿರ್ದೇಶನ, ದೊಡ್ಡರಂಗೇಗೌಡ, ಲಕ್ಷ್ಮಣ್ ನಾಯಕ್ ಹೊ.ನ. ಸಿದ್ಧಪ್ಪ ಸಾಹಿತ್ಯವಿದೆ. ದುನಿಯಾ ರಶ್ಮಿ, ಜಗದೀಶ್ರಾಜ್, ಜಯಲಕ್ಷ್ಮಿ, ಹರೀಶ್ ರಾಯ್, ಎಂ.ಎಸ್.ಉಮೇಶ್, ಶಂಕರ್ ಪಾಟೀಲ್, ಚಿಕ್ಕಹೆಜ್ಜಾಜಿ ಮಹದೇವ್, ಮಾ|| ಮಿಥುನ್, ಮಾ||ಬಾಲಾಜಿ, ಮಾ|| ಅಭಿಷೇಕ್, ಮಾ||ಕಿರಣ್, ಕು.ನವ್ಯ ಅಭಿನಯಿಸುತ್ತಿದ್ದಾರೆ.